ಹಾಸನ-ರಸ್ತೆತಡೆ,ಬೇಲೂರು-ಮೆರವಣಿಗೆ,ಅರಸೀಕೆರೆಯಲ್ಲಿಉದ್ವಿಗ್ನ
ಹಾಸನ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪವಿರುದ್ಧ ಜೆ.ಡಿ.ಎಸ್.ರಾಷ್ಟ್ರಾ ಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವಾಚ್ಯ ಶಬ್ದಗಳಿಂದನಿಂದಿಸಿದ್ದಾರೆ ಎಂದು ಆರೋಪಿಸಿ ನಗರ ಸೇರಿದಂತೆ ಬೇಲೂರು, ಆಲೂರು ಮತ್ತು ಅರಸೀಕೆರೆ ಪಟ್ಟಣದಲ್ಲಿ ಬಿ.ಜೆ.ಪಿ.ಕಾರ್ಯಕರ್ತರು ಪ್ರತಿ ಭಟನೆ ನಡೆಸಿದ್ದಾರೆ. ಹಾಸನದಲ್ಲಿ ಕಾರ್ಯಕರ್ತರು ರಸ್ತೆತಡೆ ನಡೆಸಿದ್ದಾರೆ.ಅರಸೀಕೆರೆಯಲ್ಲಿ ಬಿ.ಜೆ.ಪಿ.ಪ್ರತಿ ಭಟನೆ ವೇಳೆ ಕಿಡಿಗೇಡಿಗಳು ಚಪ್ಪಲಿ ತೂರಿ ದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣ ವಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು. ನಗರದಲ್ಲಿ ಬೆಳಿಗ್ಗೆ ಬಿ.ಜೆ.ಪಿ. ಕಾರ್ಯ ಕರ್ತರುಎನ್.ಆರ್.ವೃತ್ತದಲ್ಲಿರುವಬಿ.ಜೆ.ಪಿ. ಕಾರ್ಯಾಲಯದಿಂದ ಮೆರವಣಿಗೆ ಆರಂಭಿಸಿ ದರು.ಮೆರವಣಿಗೆಬಸ್ನಿಲ್ದಾಣರಸ್ತೆ,ಮಹಾ ವೀರ ಸರ್ಕಲ್, ಸುಭಾಷ್ ಚೌಕ, ಮತ್ತಿ ತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹಾಜರಿದ್ದರು. ಅರಸೀಕೆರೆಯಲ್ಲಿಉದ್ವಿಗ್ನ: ಅರಸೀಕೆರೆ ಪಟ್ಟಣದಲ್ಲಿಸೋಮವಾರ ಬಿ.ಜೆ.ಪಿ.ಕಾರ್ಯ ಕರ್ತರು ಪ್ರತಿಭಟನೆ ನಡೆಸುವ ವೇಳೆ ಚಪ್ಪಲಿ ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಹತ್ತು ನಿಮಿಷಕ್ಕೂ ಹೆಚ್ಚು ವೇಳೆ ರಸ್ತೆತಡೆ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ವಿಧಾನ ಪರಿಷತ್ ಸದಸ್ಯ ಬಿ.ಆರ್. ಗುರುದೇವ್, ಮುಖಂಡರಾದನವಿಲೆ ಅಣ್ಣಪ್ಪ,ನಾರಾಯಣ್, ಸುರೇಶ್,ಮತ್ತಿತರರು ವಹಿಸಿದ್ದರು. ಬೇಲೂರು ವರದಿ : ಬೇಲೂರಿ ನಲ್ಲಿ ಜಿಲ್ಲಾಬಿ.ಜೆ.ಪಿ.ಅಧ್ಯಕ್ಷ ಡಾ।ಸುಂದರ್ನೇತೃತ್ವ ದಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ।।ಸುಂದರ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಿ.ಎಂ. ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಕಟು ವಾಗಿ ಟೀಕಿಸಿದರು. ನೈಸ್ ವಿವಾದ ಕುರಿತು ಯಾರಿಗೂ ಗೊತ್ತಿಲ್ಲ.ಈವಿವಾದಸೃಷ್ಟಿಯಾಗಲುಯಾರು ಕಾರಣರು?ಎಂದುಪ್ರಶ್ನಿಸಿದರು. ಈಸಂದರ್ಭದಲ್ಲಿಬಿ.ಜೆ.ಪಿ.ಮುಖಂಡ ರಾದ ಗೆಂಡೇಹಳ್ಳಿ ಕುಮಾರ್, ಮತ್ತಿತರರು ತೂರಿರುವಘಟನೆನಡೆದಿದೆ. ಬಿ.ಜೆ.ಪಿ.ಕಾರ್ಯಕರ್ತರು ಬಸ್ನಿಲ್ದಾಣ ರಸ್ತೆಯ ಸನಿಹ ಪ್ರತಿಭಟನೆ ನಡೆಸುತ್ತಿದ್ದರು.ಈ ಹಂತದಲ್ಲಿ ಶಾಸಕ ಶಿವಲಿಂಗೇಗೌಡರ ನೇತೃತ್ವ ದಲ್ಲಿ ಜೆ.ಡಿ.ಎಸ್. ಕಾರ್ಯಕರ್ತರು ಜನ ಜಾಗೃತಿ ಸಮಾವೇಶದ ಹಿನ್ನಲೆಯಲ್ಲಿ ಮೆರ ವಣಿಗೆ ನಡೆಸಿದರು. ಈ ಹಂತದಲ್ಲಿ ಕಿಡಿಗೇಡಿಯೊಬ್ಬ ಬಿ.ಜೆ.ಪಿ. ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಕಡೆ ಚಪ್ಪಲಿ ತೂರಿದನು. ಇದರಿಂದ ಕೆಲಕಾಲ ಉದ್ವಿಗ್ನ ವಾತಾ ವರಣನಿರ್ಮಾಣವಾಗಿತ್ತು.ಪೊಲೀಸರುಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಘಟನೆ ಕುರಿತು ಬಿ.ಜೆ.ಪಿ. ಮುಖಂಡ ಕಾಟೇಕೆರೆ ಪ್ರಸನ್ನ ಪ್ರತಿಕ್ರಿಯಿಸಿ, ಜೆ.ಡಿ.ಎಸ್. ಕಾರ್ಯಕರ್ತರು ಚಪ್ಪಲಿ ಎಸೆದಿದ್ದಾರೆ. ಚಪ್ಪಲಿ ಎಸೆದವರನ್ನು ಬಂಧಿ ಸಬೇಕು ಎಂದು ಒತ್ತಾಯಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟನೆ ನೀಡಿ,ಬಿ.ಜೆ.ಪಿ.ಕಾರ್ಯಕರ್ತರು, ಜೆ.ಡಿ.ಎಸ್. ಕಾರ್ಯಕರ್ತರಿಗೆ ಪ್ರಚೋದನೆನೀಡುವರೀತಿ ಯಲ್ಲಿ ಪಕ್ಷದ ಬಾವುಟಹಾರಿಸುತ್ತಿದ್ದರು.ಆದರೆ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರು ಚಪ್ಪಲಿ ಎಸೆದಿಲ್ಲಎಂದರು